Posts

ಸಮಯೋಚಿತ ಚಾತುರ್ಯ ಮುನಿಸಿಗೊಂದು ರಹದಾರಿ : ಒಂದು ಅವಲೋಕನ

ಅನಾದಿ ಕಾಲದಿಂದಲೂ ಮುನಿಸಿಕೊಳ್ಳುವವರ ಯಶೋಗಾಥೆಗಳನ್ನು ಕೇಳುತ್ತ ಬೆಳೆದಿರುವ ನಮಗೆ ಅದರ ಪರಿಣಾಮಗಳ ಬಗ್ಗೆಯೂ ತಿಳಿದಿರುವ ವಿಷಯವೇ.  ಋಷಿ ಮುನಿಗಳ ಮುನಿಸಿನ ವಿಷಯವೇನೂ ಇದಕ್ಕೆ ಹೊರತಾಗಿಲ್ಲ. ಮುನಿಸಿಕೊಂಡ ಋಷಿಗಳ ಶಾಪ ವಿಮೋಚನೆಗೆ ಸಹಸ್ರ ವರ್ಷಗಳನ್ನೇನೋ ಅದ್ಯಾವುದೋ ಸ್ಥಳ ಮತ್ತು ರೂಪವೇಶಗಳಲ್ಲಿ ಕಳೆದಿರುವಂತವರಲ್ಲಿ  ಸಾಮಾನ್ಯರು, ಧರಿತ್ರಿ ಸಂಜಾತರು , ಭೂಪಾಲರು ಹಾಗೆಯೇ ದೇವತೆಗಳೇನೂ ಸೇರಿಕೊಂಡಿರುವುದಂತೂ ನಿಜವೇ ಸರಿ. ಸಹಸ್ರಾರು ವರ್ಷಗಳು ಶಾಪವಿಮೋಚನೆಗೆಯೇ ಸಂಧಿರುವ ಎಸ್ಟೋ ಸಾಕ್ಷ್ಯಗಳು ಜನಮನದಾಳದಲ್ಲಿರುವಾಗ ನಮ್ಮನಿಮ್ಮಯ  ಮುನಿಸಿಗೆಲ್ಲಿಯ ಹರಿವುಯಿಲ್ಲಿ?   ಅಷ್ಟಕ್ಕೂ ಕೋಪಿಸಿಕೊಳ್ಳುವುದರಲ್ಲಿ ಎಂತಹ ಸುಖಶಾಂತಿಯುಂಟು?    ಪ್ರೀತಿಯನ್ನು ಹೇಗೆ ನಾಲ್ಕು ವಿವಿಧ ರೂಪದಲ್ಲಿ ಕಾಣಬಹುದೋ ಹಾಗೆಯೇ ಕೋಪಕ್ಕೂ ವ್ಯಕ್ತಪಡಿಸುವ ರೂಪಗಳಿರಬಹುದೇನೋ ಅಲ್ಲವೇ? ಹಾಗಾದರೆ ಅವ್ಯಾವುವು ? 1). ಮಗುವಿನ ಹುಸಿಗೋಪ  2). ಸಮವಯಸ್ಕರ ಮುಂಗೋಪ   3). ಮಧಾಂಧ ಕೋಪ  4). ಇರುಳುಗೋಪ  ಈ ಮೇಲ್ಕಂಡ ನಾಲ್ಕರಲ್ಲಿ ಧರ್ಪದುಮ್ಮಾನದ ಮಧಾಂಧ ಕೋಪ ಎಂದಿಗೂ ವಿನಾಶಿನಂಚಿನದು ಹೇಗೆಂದರೆ ಯಾವೊಬ್ಬ ಮನುಶ್ಯನಲ್ಲಿ ಹಣ, ಅಧಿಕಾರ ಮತ್ತು ಭುಜಭಲದ ಧರ್ಪವಿರುವುದೋ ಅಂತವರ ಕೋಪ ಸದಾ ಮತ್ತೊಬ್ಬರ ಅಳಲು ಮತ್ತು ಅಳಿವಿಗೆ ಕಾರಣವಾಗುತ್ತದೆ ಆದರೆ ಒಂದಂತೂ ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕು ಧರ್ಪದ ...

THE STREAK BETWEEN SUCCESS & CONTENTMENT

Nonetheless  humankind devoid itself racing with comfort , it won't  attain the pinnacle of contentment . If , being successful in the profession is all about being contented  in life then there probably wouldn't have been the responsibility of twining ourselves with all chains of lively relationships in the life.     What actually meant the life is all about and enjoying of being successful in life ?    Success and Contentment , are ofcourse  like a mirage of desert &  horizon of sky and ocean but together draws keenness all through life, endows with lots of opportunities ,prepares us psychologically to achieve it and in fact are the only driving force to enable us to exhibit potentials to what is to be achieved to be overwhelmed in life.    In fact it's not a mere matter to peak the pinnacle of the success so lazily and easily ,one should have the intense urge  to withstand with the gust of pessimism and should exube...

ಸ್ಮೃತಿಪಟಲದ ಸಮರ ಮಸ್ತಿಷ್ಕದೊಂದಿಗೆ

ನನ್ನ ವೃತ್ತಿಯೇ ಹೀಗೊಂದು ರೂಢಿಯನ್ನು ಪರಿಚಯಿಸಿಬಿಟ್ಟಿದೆ, ವಿದ್ಯಾರ್ಥಿಗಳು ವರ್ಗದಲ್ಲಿಲ್ಲವೆಂದರೆ ಇಣುಕಿ ನೋಡಿ ಖಾತ್ರಿ ಪಡಿಸಿಕೊಳ್ಳುವುದನ್ನ. ಸುಮಾರು ನಾಲ್ಕು ತಿಂಗಳುಗಳು ಉರುಳಿ ಹೋದವು ಪ್ರಾಂಗಣದಲ್ಲಿ ಮಕ್ಕಳ ಶಬ್ದವಿಲ್ಲದೆಯೇ ಬಹುಶಃ ಇಂದು , ನಾಳೆ ಅಥವಾ ಕೆಲವು ದಿನಗಳ ನಂತರವಾದರೂ ಬಂದೇ ಬರುವರೆಂಬ ನಂಬಿಕೆಯಲ್ಲಿ ದಿನಗಳು ಕಳೆಯುತ್ತಿವೆ.   ನಂಬಿಕೆಯ ಪ್ರಕಾರ ಕಳೆದೊಂದು ಶತಮಾನದಲ್ಲಿ ಇಷ್ಟೊಂದು ದೀರ್ಘಾವಧಿಯ ದಿನಗಳನ್ನು ವಿದ್ಯಾರ್ಥಿಗಳು ಇಲ್ಲದೆಯೇ ಒಬ್ಬ ಶಿಕ್ಷಕ ಕಳೆದಿರುವುದು ಇದೇ ಮೊದಲಾಗಿರಬಹುದು. ಅವರಿರುವಾಗ ಹೇಗೋ ಮುಗ್ಧ ಮನಸ್ಸುಗಳನೊಡಗೂಡಿ ದಿನ ಗತಿಸಿದ್ದೇ ತಿಳಿದುಬರುತ್ತಿರಲಿಲ್ಲ . ಮೊದಲನೇ ಅವಧಿಯಿಂದಲೇ ಯಾವ್ಯಾವ ಸ್ತರದ ವಿದ್ಯಾರ್ಥಿಗಳನ್ನು ಹೇಗೇಗೆ  ಜೀವನದ ದಾರಿಯನ್ನು ಸುಗಮಗೊಳಿಸಿಕೊಳ್ಳಲು ಅನುವು ಮಾಡಬೇಕೆಂಬ ತರಹೇವಾರಿ ಆಲೋಚನೆಗಳು ಮಸ್ತಿಷ್ಕದ ಅಂಗಳದಲ್ಲಿ ನೃತ್ಯ ಮಾಡುತ್ತಿರುತ್ತಿದ್ದವು ಆದರೀಗ ಅವುಗಳ ಸುಳಿವೇ ಇಲ್ಲದಂತಾಗಿಬಿಟ್ಟಿದೆ. ಎಂದೋ ಒಂದು ದಿನ ತರಗತಿಗೆ ತಡವಾಗಿ ಬಂದ ವಿದ್ಯಾರ್ಥಿಯನ್ನು ಪರವಾನಿಗೆ ನೀಡದೆ ಕೊಠಡಿಯ ಮೂಲೆಯಲ್ಲಿ ನಿಲ್ಲಿಸಿದ ನೆನಪು ಸ್ಮೃತಿಪಠಲದ ಮೇಲೆ ಮಿಂಚಿನಂತೆ ಹಾಯ್ದು ಹೋದಂತನಿಸುತ್ತಿದೆ . ಇದೇ ಬಹುಶಃ ಈವತ್ತಿನ ನನ್ನೀ ಆಲೋಚನೆ ಮತ್ತು ನಾಜೂಕು ಪರಿಸ್ಥಿತಿಗೆ ಕಾರಣವಿರಬಹುದಾ ಎಂದೆನಿಸುತ್ತಿದೆ? ಅಥವಾ ಅವರಿಗರಿವಿಲ್ಲದಂತೆಯೇ ಹಠಾತ್ತನೆ ವಿಷಯದ ಪರೀಕ್ಷೆಯನ್ನು ನಡೆಸಿದುದಕ...

ಮನಸ್ಸಿನ ನಿಗ್ರಹದ ಸುತ್ತ : ಒಂದು ಅವಲೋಕನ

ಎಷ್ಟೋ ವರ್ಷಗಳು ಉರುಳಿದವು ಮನಸ್ಸಿನ ಮೇಲೆ ನಿಯಂತ್ರಣ ಹೊಂದಲು ಪ್ರಯತ್ನಿಸುತ್ತ ಆದರೂ ಮನಸ್ಸಿನ ಮೂಲೆಯಲ್ಲೆಲ್ಲೋ ಒಂದು ಕೊರಗು ಇದ್ದೇ ಇರುತ್ತೆ ' ನಾನದನ್ನು ಇನ್ನೂ ಚೆನ್ನಾಗಿ ನೆರವೇರಿಸಬಹುದಾಗಿತ್ತೆಂದು'.  ಮನಸ್ಸೇ ಹಾಗೆ ಅಲ್ಲವೇ , ಇರುವುದರಲ್ಲಿ ಸಂತೋಷ ಪಡುವುದಕ್ಕಿಂತ ಇಲ್ಲದಿರುವುದನ್ನೇ ಹೆಚ್ಚು ಬಯಸುವುದು. ಸಾಕಷ್ಟು ಸಲ ಮನಸ್ಸನ್ನು ಶಾಂತವಾಗಿ ಇರಿಸಲು ಪ್ರಯತ್ನಿಸಿದಾಗ್ಯೂ ಮನಃಸ್ಪೂರ್ತಿ ಸಂತೋಷಪಡಲು ಆಗುವುದಿಲ್ಲ ಕಾರಣವು ತಿಳಿದಿರುವ ವಿಷಯವೇ . ಹಾಗಾದರೆ ಮನಸ್ಸನ್ನು ಹಿಡಿತದಲ್ಲಿಟ್ಟಿರಲು ಏನು ಮಾಡಬೇಕೆಂದು ನಾನು ನನ್ನ ಮನಸ್ಸನ್ನೇ ಕೇಳಿಕೊಂಡೆ.  ಮನಸ್ಸಿನ ಸಲಹೆಯ ಮೆರೆಗೆಯೇ ಎಷ್ಟೋ  ಪ್ರಯತ್ನಗಳ ನಂತರ ಕಂಡುಕೊಂಡ ಉತ್ತರವೂ ಅಷ್ಟೇ ಕಠಿಣವಾಗಿತ್ತು. ಮನಸ್ಸಿನ ನಿಗ್ರಹ ಅಷ್ಟೊಂದು ಸುಲಭವೇ?  " ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಅದು ಸ್ವಮನಸ್ಸಿನ ಮೇಲೆ ವಿಜಯ ಸಾಧಿಸುವುದು " ಎಂಬುದು ಮೂಲ ಮಂತ್ರವಾದಾಗಲೇ ಮನಸ್ಸನ್ನು ನಿಗ್ರಹಿಸಬಹುದೇನೋ ಎಂದು ತಿಳಿದುಕೊಳ್ಳುವ ಸಮಯಕ್ಕೆ ಅರ್ಧ ಆಯಸ್ಸು ಕಳೆದುಹೋಗಿರುತ್ತೆ ಅಷ್ಟೇ. ಇತಿಹ್ಯಗಳನ್ನು ಮೆಲುಕು ಹಾಕಿದರೂ ಸಹ ಸಹಸ್ರಾರು ವರ್ಷಗಳೇ ಉರುಳಿ ಹೋಗಿರುವ ಪುರಾವೆಗಳು ಸಿಗುವವು ಮನಸ್ಸಿನ ನಿಗ್ರಹಕ್ಕೆ ಗತಿಸಿದ ಸಮಯ ಎಂದು. ಇಂತಹುದರಲ್ಲಿ ಈಗಿನ ಸರಾಸರಿ ಆಯುಷ್ಯವೇ 60 ಸಂವಸ್ತರಗಳಿರುವಾಗ ಇನ್ನೆಲ್ಲಿಯ ಸಹಸ್ರ ವರ್ಷಗಳ ಮಾತು.      ಒಂದೇ ಸುಲಭವಾದ ಪ...